ಮೇದೂರಿ ನಾಗೇಶ್ವರ ರಾವ್ (೩೧ ಮಾರ್ಚ್ ೧೯೧೦ - ೧೩ ಜನವರಿ ೧೯೯೮) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಮತ್ತು ಸಂಸದ. == ಜೀವನ ರೇಖಾಚಿತ್ರ == ಅವರು ೩೧ ಮಾರ್ಚ್ ೧೯೧೦ ರಂದು ಗುಂಟೂರು ಜಿಲ್ಲೆಯ ಏಟುಕೂರಿನಲ್ಲಿ ಶ್ರೀ ವೆಂಕಟರಾಯಡು ಅವರಿಗೆ ಜನಿಸಿದರು. ಅವರು ಎ.ಈ.ಎಲಮ್.ಎಮ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ೧೯೩೦ರಲ್ಲಿ ಶ್ರೀಮತಿ ಮುಸಲಮ್ಮ ಅವರನ್ನು ವಿವಾಹವಾದರು. ಅವರಿಗೆ ನಾಲ್ಕು ಮಕ್ಕಳಿದ್ದರು; ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು. ಅವರು ಅಧ್ಯಯನವನ್ನು ತೊರೆದು ೧೯೩೦ ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅವರು ವೆಲ್ಲೂರು ಮತ್ತು ಅಲಿಪುರದಲ್ಲಿ ಜೈಲು ಪಾಲಾದರು. ಅವರು ೧೯೩೬ ಮತ್ತು ೧೯೭೧ ರ ನಡುವೆ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು ಮತ್ತು ೧೯೩೭ ಮತ್ತು ೧೯೪೭ ರ ನಡುವೆ ೧೦ ವರ್ಷಗಳ ಕಾಲ ಗುಂಟೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಅವರು ೧೯೫೯ ಮತ್ತು ೧೯೭೦ ರ ನಡುವೆ ಮೂರು ಅವಧಿಗೆ ಗುಂಟೂರು ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರು ೧೯೫೧ ಮತ್ತು ೧೯೫೨ ರ ನಡುವೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ ಸದಸ್ಯರಾಗಿದ್ದರು. ಅವರು ೧೯೪೬ ರಲ್ಲಿ ಮದ್ರಾಸ್ ವಿಧಾನಸಭೆ ಮತ್ತು ೧೯೫೪ ಮತ್ತು ೧೯೫೬ ರಲ್ಲಿ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಅವರು ೧೯೭೧ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿ ಮಚಲಿಪಟ್ಟಣಂ ಕ್ಷೇತ್ರದಿಂದ ೫ ನೇ ಲೋಕಸಭೆಗೆ ಆಯ್ಕೆಯಾದರು. ಅವರು ೧೯೭೭ ಮತ್ತು ೧೯೮೦ ರಲ್ಲಿ ಕ್ರಮವಾಗಿ ೬ ನೇ ಲೋಕಸಭೆಗೆ ಮತ್ತು 7 ನೇ ಲೋಕಸಭೆಗೆ ತೆನಾಲಿ ಕ್ಷೇತ್ರದಿಂದ ಆಯ್ಕೆಯಾದರು. ೧೯೯೪ ರಲ್ಲಿ ಕೋಟ್ಲ ವಿಜಯ ಭಾಸ್ಕರ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಹಸ್ರ ಪೂರ್ಣ ಚಂದ್ರೋದಯವನ್ನು ಆಚರಿಸಲಾಯಿತು. ಅವರು ೧೩ ಜನವರಿ ೧೯೯೮ ರಂದು ನಿಧನರಾದರು. == ಉಲ್ಲೇಖಗಳು == == ಬಾಹ್ಯ ಕೊಂಡಿ == ಲೋಕಸಭೆಯ ವೆಬ್‌ಸೈಟ್‌ನಲ್ಲಿ ಎಂ. ನಾಗೇಶ್ವರ ರಾವ್ ಅವರ ಬಯೋಡೇಟಾ.